Wednesday 14 November 2012

ವಿಮೋಚನೆ


ಈ ಹಿಂದೆ ಪ್ರಕಟವಾಗಿದ್ದ ಕವಿತೆ, ಮರು ಓದಿಗೆ

ಹಲೋ ಅನು…
ವಿಮೋಚನೆ ಬಗ್ಗೆ ಮೂಡಿದ ಕೆಲವು ಸಾಲುಗಳು

ಬುದ್ಧ ಹೇಳಿದ,..
ಆಸೆಗಳಿಗೆ ತಳವಿಲ್ಲದಂತಾಗಲಿ
ನಿನ್ನ ಬದುಕಿನ ಪಾತ್ರೆ…
ಕಾಣುವುದು ಆಗ ಬದುಕು ವಿಮೋಚನೆಯ ಸವಿನಿದ್ರೆ

ಇನ್ನೊಬ್ಬ ಗುರು ಹೇಳಿದ,..
ಅಜ್ಞಾನದ ಕೋಣೆಯ ಬಿಟ್ಟು
ಜ್ಞಾನ ಕೋಣೆಯ ಕಡೆಗೆ ಗುರಿಯಿಟ್ಟು
ನಡೆದು ಸೇರುವುದೇ ವಿಮೋಚನೆಯ ಗುಟ್ಟು..

ವಿಮೋಚನೆಯ ಪ್ರತಿಪಾದಕ ದೈವಶಾಸ್ತ್ರಜ್ಞ ಹೇಳಿದ..
ಅಸಮಾನತೆ, ಶೋಷಣೆ ಜಗತ್ತು ಕೊನೆಗೊಂಡು
ಹೂಸ ಜಗತ್ತು ಸೃಷ್ಟಿಗೊಂಡು
ದೇವರಾಜ್ಯದ ಪ್ರತಿಬಿಂಬವಾಗುವುದೇ ವಿಮೋಚನೆಯ ಒಗಟ್ಟು..

ನಾನು ನನ್ನನೇ ಕೇಳಿದೆ…
ವಿಮೋಚನೆ ಎಂದರೇನು?
ನನ್ನ ಮರೆತು ಇನ್ನೊಬ್ಬನಿಗೆ ಸಹಾಯ ಹಸ್ತಚಾಚುವಾಗ..
ಭಯ ಮರೆತು ದಬ್ಬಾಳಿಕೆಯ ವಿರುದ್ಧ ದನಿ ಎತ್ತುವಾಗ
ಕಳವಳ ಬಿಟ್ಟು ಇನ್ನೊಬ್ಬನಲ್ಲಿ ವಿಶ್ವಾಸವಿರುಸುವಾಗ..
ಹೀಗೆ ಬದುಕಿನ ಪ್ರತಿಕ್ಷಣದ ದಂದ್ವದಲ್ಲಿ..
ಕೆಟ್ಟತನ ಬಳಲಿ ಸೋತು ತನ್ನಲ್ಲಿ
ಒಳ್ಳೆತನ ಗೆಲ್ಲುವುದೇ ವಿಮೋಚನೆ… ಅದೇ ನಿಸ್ವಾರ್ಥ.. ನ್ಯಾಯ…ವಿಶ್ವಾಸ… ಮಾನವೀಯತೆ
ಆದ್ದರಿಂದ ವಿಮೋಚನೆಂಬುವುದು….
ದೂರದ ಮಾತಲ್ಲ.. ತಲುಪುವ ಸ್ಥಳವಲ್ಲ
ಅದು ಪ್ರತಿಕ್ಷಣದ ಗೆಲ್ಲುವು..ಕ್ಷಣ ಹೆಜ್ಜೆಯ ಒಲವು…

ಜೋವಿ
Read more!

No comments:

Post a Comment